Saturday, July 3, 2010

0

ಸ್ವರ್ಣವಲ್ಲಿಗೆ ನನ್ನ ಮೊದಲ ಭೇಟಿ

  • Saturday, July 3, 2010
  • ಡಾ.ಶ್ರೀಧರ ಎಚ್.ಜಿ.
  • Share
  • ತಮ್ಮನ ಮಗ ಚೇತನ್‌ನ ಉಪನಯನದ ನಿಮಿತ್ತ ಮೇ ೧೩ರಂದು ಊರಿನ ಕಡೆಗೆ ಮುಖಮಾಡಿದೆ. ಮೇ ೧೬ ರಂದು ಕಾರ್ಯಕ್ರಮವು ಚೆನ್ನಾಗಿ ನಡೆತು. ತುಂಬಾ ವರ್ಷಗಳಿಂದ ಭೇಟಿಯಾಗಲು ಸಾಧ್ಯವಾಗದೇ ಇದ್ದ ನೆಂಟರಿಷ್ಟರನ್ನು ನೋಡಲು ಸಾಧ್ಯವಾತು. ಕಾರ್ಯದ ಮನೆ ಎಂದರೆ ಹಾಗೇ. ಅಪರೂಪದ ವ್ಯಕ್ತಿಗಳೆಲ್ಲರೂ ಸಿಗುತ್ತಾರೆ. ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ನಮ್ಮ ಸಡಗರ, ಸಂಭ್ರಮವನ್ನು ಹೆಚ್ಚಿಸುತ್ತಾರೆ. ಎಲ್ಲರನ್ನೂ ಒಂದೆಡೆ ಸೇರುವಂತೆ ಮಾಡುವ ಈ ಬಗೆಯ ಕಾರ್ಯಕ್ರಮಗಳು ಆಗಾಗ ನಡೆಯುತ್ತಿರಬೇಕು.
    ಇದಾಗಿ ಎರಡು ದಿನಕ್ಕೆ ಅಂದರೆ ಮೇ ೧೮ ರಂದು ಶಿರಸಿ ಬಳಿಯ ಸ್ವರ್ಣವಳ್ಳಿ ಮಠಕ್ಕೆ ಭೇಟಿನೀಡುವ ಅಪೂರ್ವ ಅವಕಾಶವೊಂದು ಒದಗಿ ಬಂತು. ಹಲವು ಸಮಯದಿಂದ ನನಗೂ ಈ ಮಠವನ್ನು ನೋಡಬೇಕೆಂಬ ಅಪೇಕ್ಷೆ ಮನಸ್ಸಿನಲ್ಲಿತ್ತು. ಇದಕ್ಕೆ ನೆಪವಾದದ್ದು ಕುಸುಮಚಿಕ್ಕಿಯ ನಿವೇದನೆ ಪುಸ್ತಕ ಬಿಡುಗಡೆ ಸಮಾರಂಭ.
    ಮುಂಜಾನೆ ನಮ್ಮ ಮನೆ ಮುಂಡಿಗೆ ಹಳ್ಳದಿಂದ ಹೊರಟು ಮೊದಲು ನಾವೆಲ್ಲ ಶಿರಸಿಗೆ ಹೋದೆವು. ಶಿರಸಿಯಲ್ಲಿ ನಮ್ಮ ಕುಟುಂಬದ ಸ್ನೇಹಿತರೂ, ನನ್ನ ಸಹೋದ್ಯೋಗಿಯೂ ಆಗಿದ್ದ ಪ್ರೊ. ಜಿ.ಟಿ. ಭಟ್ ಮತ್ತು ಜಯಕ್ಕನ ಮನೆಗೆ ನಮ್ಮ ಮೊದಲ ಭೇಟಿ. ಶಿರಸಿವರೆಗೆ ಹೋಗಿ ಜಯಕ್ಕನ ಮನೆಗೆ ಹೋಗದಿದ್ದರೆ ಹೇಗೆ ? ನಾನು ಶಿರಸಿ ಕಾರ್ಯಕ್ರಮದ ಸುದ್ದಿಯನ್ನು ಕೇಳಿ ನನ್ನ ಅಮ್ಮ ಸರೋಜ, ಪತ್ನಿ ಸವಿತ, ಈಕೆಯ ತಂಗಿ ಕವಿತಾ ಜೊತೆಯಲ್ಲಿ ಹೊರಟರು. ಅವರಿಗೆ ಜಯಕ್ಕನ ಮನೆಗೆ ಭೇಟಿ ನೀಡುವುದು ಮುಖ್ಯ ಕಾರ್ಯಕ್ರಮ. ಜಯಕ್ಕನಲ್ಲಿ ಆಸ್ರಿಗೆ ಕುಡಿದು ಅಲ್ಲಿಂದ ಶಿರಸಿಯ ದೇವತೆ ಮಾರಿಯಮ್ಮ ದೇವಾಲಯ ಮತ್ತು ಗಣಪತಿ ದೇವಾಲಯಕ್ಕೆ ಜಯಕ್ಕನ ಮಾರ್ಗದರ್ಶನದಲ್ಲಿ ಭೇಟಿ ನೀಡಿದೆವು. ಜಯಕ್ಕನ ಮನೆಯ ಸ"ಪದಲ್ಲಿರುವ ಪಾದುಕಾಶ್ರಮಕ್ಕೂ ನಾನು, ಅಮ್ಮ ಮತ್ತು ಚಿಕ್ಕಿ ಒಂದು ರೌಂಡ್ ಹೋಗಿಬಂದೆವು. ಪಾದುಕಾಶ್ರಮದ ಪರಿಸರವೇನೋ ಚೆನ್ನಾಗಿತ್ತು. ಆದರೆ ಒಬ್ಬ ವ್ಯಕ್ತಿ ನಮ್ಮ ಹಿಂದೆ ಗೂಢಚಾರನಂತೆ ಹಿಂಬಾಲಿಸಿಕೊಂಡು ಬಂದಿದ್ದು ನನಗೇನೂ ಹಿತವಾಗಲಿಲ್ಲ. ಆಶ್ರಮಕ್ಕೆ ಬಂದವರನ್ನು ಈ ರೀತಿ ಹಿಂಬಾಲಿಸುವುದು ಒಳ್ಳೆಯ ಲಕ್ಷಣವಲ್ಲ. ಬರುವ ಭಕ್ತರು ಅಥವಾ ಪ್ರವಾಸಿಗರೇನು ಭಯೋತ್ಪಾದಕರೇ? ಅಲ್ಲಿದ್ದವರೂ ಸಹ ನಮ್ಮ ಪ್ರಶ್ನೆಗೆ ಸರಿಯಾಗಿ ಉತ್ತರಿಸಲೂ ಇಲ್ಲ. ಹೀಗಾಗಿ ಆಶ್ರಮದ ಒಳಗಿನ ವಾತಾವರಣ ನನಗೆ ಹಿತವಾಗಲಿಲ್ಲ.
    ಜಯಕ್ಕನ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡಿ ನಾವು ಸ್ವರ್ಣವಲ್ಲೀ ಮಠದ ಕಡೆಗೆ ಹೊರಟೆವು. ಇದಕ್ಕೆ ಪ್ರೊ. ಜಿ.ಟಿ. ಭಟ್ಟರು ನಮ್ಮ ಮಾರ್ಗದರ್ಶಕರು. ಈ ಹೊತ್ತಿಗಾಗಲೇ ಕುಸುಮ ಚಿಕ್ಕಿ ಸಂಭ್ರಮ ಹೇಳತೀರದು. ಈ ಹೊತ್ತಿಗೆ ಸವಿತಂಗೆ ಜ್ವರ ಬಂದಿತ್ತು. ಹೀಗಾಗಿ ಆಕೆ ಮಠಕ್ಕೆ ಬರಲಿಲ್ಲ. ಇನ್ನು ಕವಿತ ಸಹ ಜಯಕ್ಕನ ಮನೆಯಲ್ಲಿಯೇ ಉಳಿದಳು. ಹೀಗಾಗಿ ನಾನು, ಅಮ್ಮ, ಚಿಕ್ಕಿ ಮತ್ತು ಜಿ.ಟಿ. ಭಟ್ಟರು ಮಠದ ಕಡೆಗೆ ಹೊರಟೆವು.
    ನಾವು ಸ್ವರ್ಣವಲ್ಲಿಯನ್ನು ತಲುಪಿದಾಗ ಸುಮಾರು ೩.೩೦ರ ಸಮಯ. ಹಸಿರ ಹೊದಿಕೆಯ ನಡುವೆ ಕಂಗೊಳಿಸುವ ಆಶ್ರಮ. ಪ್ರಶಾಂತವಾದ ಪರಿಸರ. ಪೇಟೆಯ ಅವಸರವಿಲ್ಲ. ವಾಹನಗಳ ಗದ್ದಲವಿಲ್ಲ. ಇದರೆಡೆಯಲ್ಲಿ ಶ್ರೀ ಶಂಕರ ಜಯಂತಿಯ ಸಂಭ್ರಮ. ಇಲ್ಲಿ ಹಿರಿಯ ಸಾಹಿತಿ ನಾ.ಸು. ಭರತನಳ್ಳಿಯವರನ್ನು ಭೇಟಿ ಮಾಡಿದ್ದು ದೇವರ ದರ್ಶನವನ್ನು ಮಾಡಿದಷ್ಟೇ ಸಂತಸವನ್ನು ನೀಡಿತು. ಅವರ ಸರಳತೆ, ಸಜ್ಜನಿಕೆ ಮೊದಲ ನೋಟಕ್ಕೆ ನನ್ನನ್ನು ಆರ್ಕಸಿತು. ನಂತರ ಸ್ವಾಮಿಗಳನ್ನು ದರ್ಶನ ಮಾಡಬೇಕೆಂದು ಮಹಡಿಯ ಮೇಲೆ ಹೋದೆವು. ಆದರೆ ನಾವು ಹೋಗುವುದು ತುಸು ತಡವಾದ್ದರಿಂದ ಸ್ವಾಮಿಗಳು ಶಂಕರ ಜಯಂತಿ ಕಾರ್ಯಕ್ರಮಕ್ಕೆ ಬಂದ ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳನ್ನು ಸ್ವಾಗತಿಸಲು ಕೆಳಗೆ ಇಳಿದುಬಂದರು. ಅನಂತರ ನಮಗೆ ಅವರನ್ನು ಭೇಟಿಯಾಗಲು ಸಾಧ್ಯವೇ ಆಗಲಿಲ್ಲ.
    ಭರತನಳ್ಳಿಯವರ ಪ್ರೀತಿಗೆ ಕಟ್ಟುಬಿದ್ದು ಮಠದಲ್ಲಿ ಚಹವನ್ನು ಸೇವಿಸಿದೆವು. ಅವರ ಪ್ರೀತಿಗೆ ಯಾರನ್ನಾದರೂ ಕಟ್ಟಿಹಾಕುವ ಶಕ್ತಿದೆ. ಶ್ರೀ ಶಂಕರ ಜಯಂತಿ ಕಾರ್ಯಕ್ರಮ ಸುಮಾರು ಅರ್ಧಗಂಟೆ ತಡವಾಗಿ ಆರಂಭವಾತು. ಕಾರ್ಯಕ್ರಮದ ಪ್ರಯುಕ್ತ ಸನ್ಮಾನ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ವೈ.ಎಸ್.ವಿ. ದತ್ತ, ಶ್ರೀ ಮಾರ್ಕಂಡೇಯ ಅವಧಾನಿಗಳು, ಮತ್ತೂರು, ಜಿ.ಎಂ. ಹೆಗಡೆ ಹುಳಗೋಳ ಮತ್ತು ಶ್ರೀಮತಿ ಕೀರ್ತಿ ಮಹೇಶ ಹೆಗಡೆ ಬಳ್ಳಾರಿ ಇವರನ್ನು ಮಠದ ವತಿಂದ ಗೌರವಿಸಲಾತು. ಈ ಸಂದರ್ಭದಲ್ಲಿ ಐದಾರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ಅನಂತರ ಲೋಕಾರ್ಪಣೆಯಾದ ಕೃತಿಗಳ ಬಗೆಗೆ ೩-೪ ನಿಮಿಷ ಪರಿಚಯದ ಮಾತುಗಳನ್ನಾಡಬೇಕಾಗಿತ್ತು. ಕುಸುಮ ಚಿಕ್ಕಿಯ 'ನಿವೇದನೆ' ಯನ್ನು ಪರಿಚುಸುವ ಅವಕಾಶ ನನಗೆ ಸಿಕ್ಕಿತು. ಹೀಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೇ ಸರಿ. ಚಿಕ್ಕಿಯ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಯೋಗವೂ ನನ್ನದೇ. ಎಷ್ಟು ಮಂದಿಗೆ ಹೀಗೆ ಚಿಕ್ಕಮ್ಮನ ಪುಸ್ತಕಕ್ಕೆ ಮುನ್ನುಡಿ ಬರೆಯುವ, ಬಿಡುಗಡೆಯ ಸಂದರ್ಭದಲ್ಲಿ ಅದನ್ನು ಪರಿಚುಸುವ ಅವಕಾಶ ಸಿಗುತ್ತದೆ? ಸುಮಾರು ನಾಲ್ಕು ನಿಮಿಷ ಮಾತನಾಡಿದೆ.
    " ಹವ್ಯಕ ಸಂಸ್ಕೃತಿ ಇಂದು ಆಹಾರ, ಉಡುಗೆ, ತೊಡುಗೆ, ಶಿಕ್ಷಣ ಹೀಗೆ ಎಲ್ಲಾ ರಂಗಲ್ಲಿಯೂ ತೀವ್ರ ಸ್ವರೂಪದಲ್ಲಿ ಬದಲಾಗುತ್ತಿದೆ. ತಂತ್ರ ಜ್ಞಾನವನ್ನು ಅಪ್ಪಿಕೊಳ್ಳುವ ಭರದಲ್ಲಿ ನಾವು ಮೂಲ ಸಂಸ್ಕೃತಿಂದ ದೂರ ಸರಿಯುತ್ತಿದ್ದೇವೆ. ಧರ್ಮದ ಪ್ರಜ್ಞೆಯ ಅರಿವು ಮೊದಲು ಮನೆಂಯಿದ ಆರಂಭವಾಗಬೇಕು. ಚಿಕ್ಕಮ್ಮನ ಈ ಬಗೆಯ ಅರಿವು ಇಲ್ಲಿ ಹಾಡಾಗಿ ಮೂಡಿಬಂದಿದೆ. ಮಹಿಳೆಯರು ತಮ್ಮ ಅನುಭವಗಳನ್ನು ಬರೆಯುತ್ತಿರುವುದು ಒಳ್ಳೆಯ ಲಕ್ಷಣ. ಆಶ್ಚರ್ಯದ ಸಂಗತಿಯೆದರೆ ೧೮೮೬ರಲ್ಲಿಯೇ ಲಕ್ಷ್ಮೀ ಹೆರೀಗಂಗೆ ಗೋಕರ್ಣ ಎಂಬ ಮಹಿಳೆ 'ಬಾಗಿಲು ತಡೆಯವ ಪದಗಳು' ಎಂಬ ಕೃತಿಯನ್ನು ಪ್ರಕಟಿಸಿದ್ದು ನಮ್ಮ ಗಮನಕ್ಕೆ ಬರುತ್ತದೆ. ಈ ಪರಂಪರೆಯನ್ನು ಕುಸುಮ ಎಸ್. ರಾವ್ ಮುಂದುವರಿಸಿದ್ದಾರೆ" ಎಂಬ ಅಂಶಗಳನ್ನು ಕೇಂದ್ರೀಕರಿಸಿ ಮಾತನಾಡಿದೆ. ನನಗೆ ಆಶ್ಚರ್ಯ ಮೂಡಿಸಿದ ಸಂಗತಿಯೆಂದರೆ ಕೃತಿ ಬಿಡುಗಡೆಯ ಸಂದರ್ಭದಲ್ಲಿ ಮಠದ ವತಿಂದ ಫೋಟೋಗಳನ್ನು ತೆಗೆಯುತ್ತಿರಲಿಲ್ಲ. ದಾಖಲೆಗಾಗಿಯಾದರೂ ಫೋಟೋ ತೆಗೆದಿದ್ದರೆ ಚೆನ್ನಾಗಿತ್ತು ಅನಿಸಿತು. (ಅಥವಾ ನನಗೆ ಗೊತ್ತಿಲ್ಲದಂತೆ ತೆಗೆದಿದ್ದಾರೋ ಎನೋ!) ನಾವು ಹೊರಟಾಗ ೭.೩೦ರ ಸಮಯ. ಕಾರ್ಯಕ್ರಮ ಇನ್ನೂ ಮುಗಿದಿರಲಿಲ್ಲ. ಸ್ವರ್ಣವಲ್ಲಿಯ ಭೇಟಿಯ ನೆನಪು ಮನದಲ್ಲಿ ಉಳಿತು. ಹಾಗೆಯೇ ಸ್ವಾಮಿಗಳನ್ನು ಭೇಟಿಯಾಗಲು ಸಾಧ್ಯವಾಗದ ಕೊರತೆಯೊಂದು ಮನಸ್ಸಿನಲ್ಲಿ ಉಳಿತು. ಯಾವುದಕ್ಕೂ ಸಮಯ ಬರಬೇಕಲ್ಲ!

    0 Responses to “ಸ್ವರ್ಣವಲ್ಲಿಗೆ ನನ್ನ ಮೊದಲ ಭೇಟಿ”

    Subscribe