Friday, October 21, 2011

0

ಹೆಗ್ಗಾರಳ್ಳಿಗೆ ಭೇಟಿ

  • Friday, October 21, 2011
  • ಡಾ.ಶ್ರೀಧರ ಎಚ್.ಜಿ.

  • ಹೆಗ್ಗಾರಳ್ಳಿ ಊರಿನ ಬೀದಿಯ ಚಿತ್ರ
    ಬದುಕಿನ ಯಾವುದೋ ಘಟ್ಟದಲ್ಲಿ ಹಲವು ಕುಟುಂಬಗಳು ಒಂದು ಊರಿನಿಂದ ಇನ್ನೊಂದು ಊರಿಗೆ ವಲಸೆ ಹೋಗಿರುವ ಸಾಧ್ಯತೆದೆ. ನಮ್ಮ ಕುಟುಂಬವೂ ಸುಮಾರು ನೂರು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸಮೀಪದ ಹೆಗ್ಗಾರಳ್ಳಿ ಎಂಬ ಊರಿನಿಂದ ಸಿರಿವಂತೆ ಸಮೀಪದ ಸಸರವಳ್ಳಿ ಎಂಬ ಹಳ್ಳಿಗೆ ವಲಸೆ ಬಂದರು. ಇದು ನಮ್ಮ ತಾತನ ತಂದೆಯ ಕಾಲದಲ್ಲಿ ನಡೆದ ಘಟನೆ. ಸಸರವಳ್ಳಿಯಲ್ಲಿ ಈಗಲೂ ನಮ್ಮ ಮನೆತನಕ್ಕೆ ಹೆಗ್ಗಾರಳ್ಳಿಮನೆ ಎಂಬ ಹೆಸರಿದೆ. ಹಾಗೆ ನೋಡಿದರೆ ಹವ್ಯಕ ಸಮುದಾಯದ ಕುಟುಂಬಗಳಲ್ಲಿ ಈ ವಲಸೆಯ ಪ್ರಕ್ರಿಯೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿರುವುದು ಕಂಡುಬರುತ್ತದೆ. ದಕ್ಷಿಣ ಕನ್ನಡದಲ್ಲಿರುವ ಹವ್ಯಕರು ಉತ್ತರ ಕನ್ನಡ ಇಲ್ಲವೇ ಶಿವಮೊಗ್ಗ ಜಿಲ್ಲೆಯ ಕಡೆಂದ ವಲಸೆ ಬಂದಿರುವುದು ಕಂಡುಬರುತ್ತದೆ. ಈ ವಲಸೆಯ ಪ್ರಕ್ರಿಯೆ ಯಾವಾಗ ಯಾವ ಪ್ರಮಾಣದಲ್ಲಿ ನಡೆತು ಎಂಬುದರ ಬಗೆಗೆ ಅಧ್ಯಯನ ನಡೆಸುವ ಅಗತ್ಯವಿದೆ.


    ಹೀಗೆ ವಲಸೆ ಬಂದ ಪ್ರತಿಯೊಬ್ಬರಿಗೂ ತಮ್ಮ ಮೂಲ ಊರಿನ ಬಗೆಗೆ ಒಂದು ವ್ಯಾಮೋಹ ಮನಸ್ಸಿನಾಳದಲ್ಲಿ ಇರುತ್ತದೆ. ನನಗೂ ನಮ್ಮ ಮನೆತನದ ಮೂಲ ಊರಾದ ಹೆಗ್ಗಾರಳ್ಳಿ ಊರನ್ನು ನೋಡಬೇಕೆಂಬ ಅಪೇಕ್ಷೆ ಬಹಳ ಕಾಲದಿಂದ ಇತ್ತು. ಆದರೆ ಮಾಹಿತಿಯ ಕೊರತೆ, ಹೆಗ್ಗಾರಳ್ಳಿಯಲ್ಲಿ ಯಾರೂ ಪರಿಚಯವಿಲ್ಲದ ಕಾರಣ ಊರಿಗೆ ಹೋಗಲು ಒಂದು ಎಳೆ ಸಿಕ್ಕಿರಲಿಲ್ಲ. ಹೀಗಿರುವ ಸಂದರ್ಭದಲ್ಲಿ ನಾಲ್ಕಾರು ವರ್ಷಗಳ ಹಿಂದೆ , ಪತ್ರಿಕೆಯಲ್ಲಿ ಬಂದ ಯಕ್ಷಗಾನದ ಒಂದು ಜಾಹಿರಾತಿನಲ್ಲಿ ಮನೋಜ್ ಭಟ್ ಎಂಬುವವರ ಹೆಸರು ಕಣ್ಣಿಗೆ ಬಿತ್ತು. ಹೆಸರಿನೊಂದಿಗೆ ಅವರ ಮೊಬೈಲ್ ನಂಬರು ಸಹ ಸಿಕ್ಕಿತು. ವ್ಯಕ್ತಿಯನ್ನು ಸಂಪರ್ಕಿಸಿ ಹೆಗ್ಗಾರಳ್ಳಿ ಊರಿಗೆ ಹೋಗಬಹುದು ಎಂದು ಮನಸ್ಸಿನಲ್ಲಿಯೇ ಲೆಕ್ಕಹಾಕಿದೆ. ಅನಂತರವೂ ಒಂದಿಲ್ಲೊಂದು ತೊಂದರೆಂದ ಕಡೆಗೆ ಹೋಗಲು ಸಾಧ್ಯವಾಗಿರಲಿಲ್ಲ.

    ಕಳೆದ ಮೇ ತಿಂಗಳಲ್ಲಿ ಊರಿಗೆ ಹೋದಾಗ ಹೆಗ್ಗಾರಳ್ಳಿ ಊರು ನನ್ನನ್ನು ಸೆಳೆಯತೊಡಗಿತು. ಇದಕ್ಕೆ ಪೂರಕವಾಗಿ ಶಿರಸಿಂದ ಹುಲೇಕಲ್ ಮಾರ್ಗವಾಗಿ ಹೋಗುವ ಸಮೀಪದ ಓಣಿಕೆರೆ ಎಂಬ ಸಂಬಂಧಿಕರ ಮನೆಗೆ ಹೋಗುವ ಅವಕಾಶ ಸ್ಟೃಯಾತು. ನಾನು ಮತ್ತು ಸವಿತ ಇಬ್ಬರೇ ನಮ್ಮ ವಾಹನದಲ್ಲಿ ಓಣಿಕೆರೆಗೆ ಹೋದೆವು. ಅಲ್ಲಿಂದ ಹೆಗ್ಗಾರಳ್ಳಿ ಊರಿನ ತಪಾಸಣೆಗೆ ಆರಂಭಿಸಿದೆ. ಹಳೆಯ ನಂಬರನ್ನು ಹುಡುಕಿ ಮನೋಜ್ ಭಟ್ ಎಂಬ ವ್ಯಕ್ತಿಗೂ ಕರೆಮಾಡಿದೆ. ಮೊದಲ ಸಲಕ್ಕೆ ಈ ವ್ಯಕ್ತಿ ಸಿಗಲಿಲ್ಲ. ಅನಂತರ ಮಾತಿಗೆ ಸಿಕ್ಕಿದರು. ನಾನು ನನ್ನ ಅಹವಾಲನ್ನು ತೋಡಿಕೊಂಡೆ. ನನಗೆ ನಮ್ಮ ಪೂರ್ವಜರ ಊರಿನ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವ ಸಂಭ್ರಮವಿತ್ತು. ಆದರೆ ಈ ವ್ಯಕ್ತಿ ಇರುವುದು ಬೆಂಗಳೂರಿನಲ್ಲಿ ಎಂದಾಗ ನನಗೆ ತುಸು ನಿರಾಸೆಯಾತು. ಆದರೆ ಅವರು ತಮ್ಮ ಊರಿಗೆ ಹೋಗುವ ಮಾರ್ಗವನ್ನು ಸೂಚಿಸಿ ಹೆಗ್ಗಾರಳ್ಳಿಯಲ್ಲಿ ತಮ್ಮ ಮನೆಗೆ ಹೋಗುವಂತೆ ಸೂಚಿಸಿದರು. ನನಗೆ ಇದರಿಂದ ಅನಂದವಾಗಿತ್ತು.

    ಮರುದಿನ ಮುಂಜಾನೆ ನಮ್ಮ ಪ್ರಯಾಣ ಹೆಗ್ಗಾರಳ್ಳಿಯ ಕಡೆಗೆ ಆರಂಭವಾತು. ಶಿರಸಿ ಮಾರ್ಗವಾಗಿ ಸಿದ್ದಾಪುರವನ್ನು ತಲುಪಿ ನಮ್ಮ ವಾಹನವನ್ನು ನಿಲ್ಲಿಸಿ ಒಂದು ಅಂಗಡಿಯಲ್ಲಿ ಹೆಗ್ಗಾರಳ್ಳಿಗೆ ದಾರಿಯನ್ನು ಕೇಳಿದೆವು. ಅವರು ತೋರಿದ ದಾರಿಯಲ್ಲಿ ಮುಂದುವರಿದೆವು. ಅವರ ಪ್ರಕಾರ ನಾವು ನಿಂತ ಸ್ಥಳದಿಂದ ಸುಮಾರು ಮೂರು ಕಿಲೋಮೀಟರ್ ದೂರ. ನಾವು ನಾಲ್ಕು ಕಿಲೋಮೀಟರ್ ಹೋದರೂ ಊರು ಸಿಗಲಿಲ್ಲ. ಮತ್ತೊಮ್ಮೆ ವಾಹನ ನಿಲ್ಲಿಸಿ ಕೇಳಿದೆವು. ನಾವು ಸರಿ ಸುಮಾರು ಎರಡು ಕಿಲೋಮೀಟರ್ ಊರನ್ನು ದಾಟಿ ಮುಂದೆ ಬಂದಿದ್ದೆವು. ಹೀಗಾಗಿ ಹಿಂದಿರುಗಿ ಹೊರಟೆವು. ಸಲ ದಾರಿ ತಪ್ಪಬಾರದೆಂದು ತುಂಬಾ ಎಚ್ಚರಿಕೆಂದ ಹೋದೆವು. ದಾರಿಯೂ ಸಿಕ್ಕಿತು. ರಸ್ತೆಂದ ಸುಮಾರು ಒಂದು ಕಿಲೋಮೀಟರ್ ಒಳಗೆ ಮಣ್ಣಿನ ರಸ್ತೆಯಲ್ಲಿ ಹೋಗಬೇಕು. ರಸ್ತೆಯೂ ತಕ್ಕಮಟ್ಟಿಗೆ ಚೆನ್ನಾಗಿತ್ತು. ನಿಧಾನವಾಗಿ ಹೋಗಿ ಒಂದು ಮನೆಯಮುಂದೆ ವಾಹನವನ್ನು ನಿಲ್ಲಿಸಿ ಕೇಳಿದೆವು. ಇಲ್ಲಿ ಮನೋಜ್ ಭಟ್ ಮನೆ ಯಾವುದು ? ನಾವು ನಿಂತ ಸ್ಥಳದ ಎದುರಿನ ಮನೆ ಅದೇ ಆಗಿತ್ತು.




    Read more...

    Subscribe