Monday, January 4, 2010

6

ಶ್ರೀಧರ ಸ್ವಾಮೀಜಿಗೆ ನಮನ !

  • Monday, January 4, 2010
  • ಡಾ.ಶ್ರೀಧರ ಎಚ್.ಜಿ.
  • Share
  • ಸ್ವಾಮೀಜಿಗಳ ಬಗೆಗೆ ವಿವಾದಗಳು ಆರಂಭವಾದಾಗಲೆಲ್ಲ ನನಗೆ ನೆನಪಾಗುವುದು ಶ್ರೀಧರ ಸ್ವಾಮಿಗಳು. ಮಹಾರಾಷ್ಟ್ರದ ಸಜ್ಜನಗಡದಿಂದ ಸಾಗರಕ್ಕೆ ಸಮೀಪದ ವರದಹಳ್ಳಿಗೆ ಆಗಮಿಸಿ ಅಲ್ಲೊಂದು ಆಶ್ರಮವನ್ನು ಸ್ಥಾಪಿಸಿ ಸದಾ ಸಮಾಜಮುಖಿಯಾಗಿ ಬದುಕಿದ ಅವರದು ಸದಾ ತಪೋಮುಖಿಯಾದ ಬದುಕು. ಬದುಕಿನಲ್ಲಿ ಯಾವುದೇ ವಿವಾದಗಳನ್ನು ಅಂಟಿಸಿಕೊಳ್ಳದೆ ಪರಿಶುದ್ಧ ಬದುಕನ್ನು ಬಾಳಿದವರು. ತಮ್ಮ ಸುತ್ತಲಿನ ಎಲ್ಲ ವರ್ಗದ ಜನ ಮತ್ತು ಸಮಾಜವನ್ನು ನಿಷ್ಕಲ್ಮಷವಾಗಿ ಪ್ರೀತಿಸಿದವರು. ಅಂತಹ ಸ್ವಮೀಜಿಯನ್ನು ಮತ್ತೆ ನೋಡಲು ಸಾಧ್ಯವೇ ಎಂಬ ಆತಂಕ ಸದಾ ಕಾಡುತ್ತದೆ. ಮೊನ್ನೆ ಊರಿಗೆ ಹೋದಾಗ ನನ್ನ ಅಮ್ಮ ತಾವು ನೋಡಿದ ಒಂದು ಘಟನೆಯನ್ನು ಹೇಳಿದರು. ಇದು ಸುಮಾರು ಐವತ್ತು ವರ್ಷಗಳ ಹಿಂದೆ ನಡೆದ ಘಟನೆ. ಸಸರವಳ್ಳಿ ದೇವಸ್ಥಾನಕ್ಕೆ ಶ್ರೀಧರ ಸ್ವಾಮಿಗಳು ಬರುವುದಿತ್ತು. ಅವರನ್ನು ನೋಡಲೆಂದು ನನ್ನ ಅಮ್ಮ ತನ್ನ ಸ್ನೇಹಿತೆ ಗಿರಿಜಕ್ಕಳೊಂದಿಗೆ ಹೋಗಿದ್ದರು. ಇವರನ್ನು ಹಿಂಬಾಲಿಸಿಕೊಂಡು ನಮ್ಮ ಅಜ್ಜ ಪ್ರೀತಿಂದ ಸಾಕುತ್ತಿದ್ದ ಒಂದು ನಾಯಿಯೂ ಹೋಯಿತು. ದಾರಿಯಲ್ಲಿ ಸಿಗುವ ತೊರೆಯೊಂದರಲ್ಲಿ ನಾಯಿ ಮುಳುಗೆದ್ದು ಸ್ನಾನಮಾಡಿತು !. ಅಮ್ಮ ದೇವಸ್ಥಾನ ತಲುಪಿದಾಗ ಶ್ರೀಧರ ಸ್ವಾಮಿಗಳು ಆಗಲೇ ಬಂದಿದ್ದರು. ಅಮ್ಮ ನಮಸ್ಕರಿಸಿ ಆಶೀರ್ವಾದ, ಅಕ್ಷತೆಯನ್ನು ಪಡೆದರು. ಸಮಯವಾಗುತ್ತಿದ್ದಂತೆ ಸ್ವಾಮಿಗಳು ಎದ್ದು ಹೊರಟರು. ದೇವಸ್ಥಾನದ ಹೆಬ್ಬಾಗಿಲಿಗೆ ಸ್ವಾಮಿಗಳು ಬರುತ್ತಿದ್ದಂತೆ ಅಮ್ಮನ ಜೊತೆಯಲ್ಲಿ ಬಂದ ನಾಯಿ ಅದೆಲ್ಲಿತ್ತೊ ಗೊತ್ತಿಲ್ಲ. ಸೀದಾ ಬಂದು ಸ್ವಾಮಿಗಳ ಕಾಲಿಗೆ ಅಡ್ಡಬಿತ್ತು. ಒಂದು ಕ್ಷಣ ಮೌನವಾದ ಸ್ವಾಮೀಜಿ " ನೀನೂ ನನ್ನ ಕಾಲಿಗೆ ಬಿದ್ದೆಯೇನೋ" ಎಂದು ಉದ್ಗರಿಸಿದರು. ಕಣ್ಮುಚ್ಚಿ ಒಂದು ಕ್ಷಣ ಧ್ಯಾನಿಸಿದರು. ಅದರ ತಲೆಯ ಮೇಲೆ ತೀರ್ಥ ಮತ್ತು ಅಕ್ಷತೆಯನ್ನು ಹಾಕಿ ಮುನ್ನಡೆದರು. ಅಮ್ಮ ಮನೆಗೆ ಬಂದರು. ನಾಯಿಯೂ ಇವರನ್ನು ಹಿಂಬಾಲಿಸಿಕೊಂಡು ಬಂದಿತು. ಮರುದಿನ ನೋಡಿದರೆ ಬಚ್ಚಲ ಮನೆಯ ಬಾವಿಕಟ್ಟೆಯ ಬಳಿ ಮಲಗಿದ್ದ ನಾಯಿ ದೇಹವನ್ನು ತ್ಯಜಿಸಿತ್ತು !.

    ನಾನು ಶ್ರೀಧರ ಸ್ವಾಮಿಗಳ ಹರಕೆಯಿಂದ ಹುಟ್ಟಿದ್ದಾಗಿ ನನ್ನಜ್ಜಿ ಯಾವಾಗಲೂ ಹೇಳುತ್ತಿದ್ದರು. ಅವರೇ ನನ್ನನ್ನು ವರದಳ್ಳಿಗೆ ಒಮ್ಮೆ ಕರೆದುಕೊಂಡು ಹೋಗಿದ್ದರು. ಆಗ ನಾನು ಶ್ರೀಧರಸ್ವಾಮಿಗಳ ಪಾದಗಳಿಗೆ ಶಿರಭಾಗಿ ವಂದಿಸಿದ್ದೆ. ಅವರು ನನ್ನ ತಲೆಯ ಮೇಲೆ ಅಕ್ಷತೆ ಹಾಕಿ ಹರಸಿದ್ದು ಈಗಲೂ ನೆನಪಿದೆ. ಅವರ ಮಂದ ಸ್ಮಿತ ಮರೆಯಲಾಗದ ಅನುಭವ.

    ಕೊನೆಯ ಮಾತು : ಈಗ ಮನುಷ್ಯರಿಗೇ ಸ್ವಾಮಿಗಳನ್ನು ಭೇಟಿ ಮಾಡುವುದು ಕಷ್ಟ. ಇನ್ನು ಪ್ರಾಣಿಗಳಿಗೆಲ್ಲಿ ಸಾಧ್ಯ. ಇದಕ್ಕು ಮಿಗಿಲಾಗಿ ಮನುಷ್ಯರು ಭೇಟಿ ಮಾಡಬಹುದಾದ ಸ್ವಾಮಿಗಳನ್ನು ಹುಡುಕುವ ಪರಿಸ್ಥಿತಿ ಬಂದಿರುವುದು ವರ್ತಮಾನದ ದುರಂತ.

    6 Responses to “ಶ್ರೀಧರ ಸ್ವಾಮೀಜಿಗೆ ನಮನ !”

    chandanms said...
    January 4, 2010 at 6:15 PM

    your article about sreedharaswamiji is very good


    ರಾಕೇಶ್ ಕುಮಾರ್ ಕಮ್ಮಜೆ said...
    January 5, 2010 at 11:44 AM

    ಬಹಳ ಆಶ್ಚರ್ಯ ತರುವ ಸಂಗತಿ ಇದು. ಬರವಣಿಗೆಯ ಶೈಲಿಯೂ ಚೆನ್ನಾಗಿದೆ.
    ನಿಮ್ಮ ಬ್ಲಾಗನ್ನು ಗಮನಿಸುತ್ತಿದ್ದೇನೆ. ಇದು ಹೀಗೆಯೇ ಮುಂದುವರಿಯಲಿ


    Unknown said...
    January 7, 2010 at 9:35 PM

    kutumba sametanaagi ninna blog odiddene. chennaagide. Shridhara swamigala bagegina baraha romaanchana untumaaditu


    Anonymous said...
    January 14, 2010 at 9:27 AM

    sir,
    I am thrilled after reading your article about shridhar swamiji ...

    and feeling happy to go through all the upto date news!!!


    Harini putturaya


    Anonymous said...
    January 14, 2010 at 6:42 PM

    priyare, nimage sridhara andu hesaru idalu aa swamijiye preraneyagirabeku.

    neevu sridhara swamiji hogi sridharji aagiddeeri, ashte.

    blog chennagide. noduthiruthene

    v chandragiri


    Shiva Kumar said...
    September 30, 2011 at 6:51 PM

    ಮಹಾತ್ಮ ಶ್ರೀದರ ಸ್ವಾಮಿಗಳ ಅಶಿರ್ವಾದದಿ೦ದ ಜನಿಸಿದ ನೀವೆ ದನ್ಯ.
    ಲೆಖನ ಓದಿ ಕಣ್ಣಲ್ಲಿ ನೀರು ಜಿನುಗಿತು


    Subscribe