Monday, January 4, 2010

0

ಹೇಮಂತ ಹಬ್ಬ

  • Monday, January 4, 2010
  • ಡಾ.ಶ್ರೀಧರ ಎಚ್.ಜಿ.
  • Share
  • ಡಾ. ತಾಳ್ತಜೆ ವಸಂತಕುಮಾರ ಇವರ ಪತ್ನಿ ಮಣಿಮಾಲಿನಿ ಇವರ ಹೆಸರಿನಲ್ಲಿ ಆರಂಭವಾಗಿರುವ ಉಪ್ಪಿನಂಗಡಿಯ ವಸುಧಾ ಪ್ರತಿಷ್ಠಾನದ ಆಶ್ರಯದಲ್ಲಿ ೨೭.೧೨.೧೦೦೯ರಂದು ಹೇಮಂತ ಹಬ್ಬ ಕಾರ್ಯಕ್ರಮ ನಡೆಯಿತು. ತಾಳ್ತಜೆಯವರ ನೆಂಟರು, ಬಂಧುಗಳು, ಸ್ನೇಹಿತರು ಆಗಮಿಸಿದ್ದರಿಂದ ಒಂದು ಕೌಟುಂಬಿಕ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಚಿನ್ನಪ್ಪಗೌಡ ಮಾತನಾಡುತ್ತ, ಕನಸುಗಳಿಲ್ಲದ ಸಮಾಜದಲ್ಲಿ ಬದುಕುವುದು ಕಷ್ಟ. ಪ್ರೀತಿ, ಸಂಬಂಧಗಳ ಬೆಸುಗೆರುವ ಬದುಕನ್ನು ಇಂದು ಕಟ್ಟಬೇಕಾದ ಸವಾಲು ನಮ್ಮ ಮುಂದಿದೆ. ಇಂತಹ ಮನೆಹಬ್ಬಗಳ ಮೂಲಕ ಕನಸುಗಳನ್ನು ತುಂಬುವ ಪ್ರಯತ್ನ ಮಾಡಬೇಕು ಎಂದು ಹೇಳಿದರು. ವಿಶ್ವವಿದ್ಯಾನಿಲಯದ ವಲಯದ ಸಂಬಂಧಗಳಲ್ಲಿ ಸಾಮೀಪ್ಯದ ಕೊರತೆದೆ. ನಾವು ಬಾಲ್ಯದ ನೆನಪು, ಮುಗ್ದತೆಗಳನ್ನು ಕಳೆದುಕೊಳ್ಳುತ್ತಿದ್ದೇವೆ. ವ್ಯಕ್ತಿಗಳ ಬದುಕಿಗೆ ಸಕಾರಾತ್ಮಕ ಚಿಂತನೆಲ್ಲದಿದ್ದರೆ ಸಮಾಜ ಮುನ್ನಡೆಯುವುದಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಸುರೇಂದ್ರರಾವ್ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಟೈಂಸ್ ಆಫ್ ಇಂಡಿಯಾದ ವರದಿಗಾರ್ತಿ ದೀಪಾಬಾಸ್ತಿ ಇವರು `ಸರಹದ್ದಿನ ಸದ್ದುಗಳು' ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಭಾರತೀಯ ಸೈನಿಕರ ಬದುಕಿನ ಜೀವನ ಚಿತ್ರ ಅವರ ಈ ಉಪನ್ಯಾಸದಲ್ಲಿ ಆತ್ಮೀಯವಾಗಿ ಮೂಡಿಬಂತು. ಹೇಮಂತ ಹಬ್ಬದ ಅಂಗವಾಗಿ ಪುತ್ತೂರಿನ ಖ್ಯಾತ ವೈದ್ಯರಾದ ಡಾ. ಗೌರಿಪೈ ಮತ್ತು ಹಿರಿಯ ವಿದ್ವಾಂಸ ಯದುರ್ಕಳ ಶಂಕರನಾರಾಯಣ ಭಟ್ಟ ಇವರನ್ನು ಸನ್ಮಾನಿಸಲಾತು. ವಸುಧಾ ಪ್ರತಿಷ್ಠಾನದ ನಿರ್ದೇಶಕರಾದ ಡಾ. ತಾಳ್ತಜೆ ವಸಂತಕುಮಾರ ಸ್ವಾಗತಿಸಿದರು. ಶ್ರೀಮತಿ ಇಂದಿರಾ ವಂದಿಸಿದರು. ಶ್ರೀಮತಿ ದುರ್ಗಾಮಣಿ ಕಾರ್ಯಕ್ರಮ ನಿರ್ವ"ಸಿದರು. ಸಭಾಕಾರ್ಯಕ್ರಮದ ಅನಂತರ ಯಕ್ಷಗಾನ ಬಯಲಾಟವಿತ್ತು. ಆಗಮಿಸಿದ ಅತಿಥಿಗಳಿಗೆ ಭರ್ಜರಿಯಾಗಿ ಉಪಾಹಾರ, ಊಟದ ವ್ಯವಸ್ಥೆಯಿತ್ತು. ಮುಂದಿನಸಲ ನೀವೂ ಬನ್ನಿ.

    0 Responses to “ಹೇಮಂತ ಹಬ್ಬ”

    Subscribe