Monday, January 4, 2010

0

ತಿಂಗಳ ತರಂಗ - ೦೩

  • Monday, January 4, 2010
  • ಡಾ.ಶ್ರೀಧರ ಎಚ್.ಜಿ.
  • Share
  • ೨೦೧೨ ಡಿಸೆಂಬರ್ ೨೧ಕ್ಕೆ ಪ್ರಳಯ ! ಎಂಬ ಸುದ್ದಿ ಮಾಧ್ಯಮಗಳಲ್ಲಿ, ಜನರಬಾಯಲ್ಲಿ ಹರಿದಾಡುತ್ತಿರುವಾಗಲೇ ಜ್ಯೋತಿಷ್ಯದ ಬಗೆಗೊಂದು ಉಪನ್ಯಾಸ ಪುತ್ತೂರು ಕರ್ನಾಟಕ ಸಂಘದ ಆಶ್ರಯದಲ್ಲಿ ೨೦.೧೨.೨೦೦೯ರಂದು ನಡೆಯಿತು. ಮನುಷ್ಯನನ್ನು ತಿದ್ದಿ, ತೀಡಿ ಪ್ರೀತಿಯನ್ನು ಬೆಳೆಸಬೇಕಾದ ಜ್ಯೋತಿಷ್ಯ ಇಂದು ಆತನನ್ನು ಅಧ:ಪತನದ ಕಡೆಗೆ ತಳ್ಳುತ್ತಿದೆ. ವಾಸ್ತವದ ನೆಲೆಯಲ್ಲಿ ನೋಡುವುದಕ್ಕೆ ಬದಲಾಗಿ ಈ ಶಾಸ್ತ್ರ ಇಂದು ಪರಿಹಾರೋದ್ಯಮವಾಗಿ ರೂಪುಗೊಂಡಿದೆ. ಜ್ಯೋತಿಷ್ಯ ಎಂದರೆ ಕಾಲವಿಜ್ಞಾನ. ಸೂರ್ಯಮಂಡಲದಲ್ಲಿ ಆಗುವ ಚಲನೆಗಳು ಮನುಷ್ಯನ ಮೇಲೆ ಪ್ರಭಾವ ಬೀರುತ್ತವೆ. ಅನಂತ ಸಾಧ್ಯತೆಗಳಲ್ಲಿ ಒಂದು ಸಾಧ್ಯತೆಯನ್ನು ಗುರುತಿಸುವ ಪ್ರಯತ್ನ ಜ್ಯೋತಿಷ್ಯ. ಸಂಖ್ಯಾಶಾಸ್ತ್ರದ ಬಲದಲ್ಲಿ ಈ ಶಾಸ್ತ್ರವನ್ನು ಬೆಳೆಸಿದರೆ ಇದು "ಜ್ಞಾನವಾಗಬಲ್ಲದು ಎಂದು ಸುಕುಮಾರ ಆಲಂಪಾಡಿ ಹೇಳಿದ್ದಾರೆ. ಅವರು `ತಿಂಗಳ ತರಂಗ' ಕಾರ್ಯಕ್ರಮದಲ್ಲಿ `ಜ್ಯೋತಿಷ್ಯದ ಬೆಳವಣಿಗೆ ಮತ್ತು ವೈಜ್ಞಾನಿಕ ಪರಿಕಲ್ಪನೆಗಳು' ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿರಾಜಪೇಟೆ ಕಾರ್ಪೊರೇಶನ್ ಬ್ಯಾಂಕಿನ ಉದ್ಯೋಗಿ ಈ. ಗೋಪಾಲಕೃಷ್ಣಭಟ್ ವಹಿಸಿ ಮಾತನಾಡುತ್ತ ಜ್ಯೋತಿಷ್ಯ ಆತ್ಮದ ವಿಕಾಸಕ್ಕೆ ಇರುವ ದಾರಿ ಎಂದು ಗ್ರಹಿಸಬೇಕು. ಈ ದಾರಿಯಲ್ಲಿ ಪ್ರಕೃತಿ ರಹಸ್ಯವನ್ನು ನಮ್ಮದನ್ನಾಗಿ ಮಾಡಿಕೊಳ್ಳಲು ಯತ್ನಿಸಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಜ್ಯೋತಿಷಿ ಜಯಶಂಕರ ಭಟ್ ಉಪಸ್ಥಿತರಿದ್ದರು. ಕರ್ನಾಟಕ ಸಂಘದ ಅಧ್ಯಕ್ಷರಾದ ಬಿ. ಪುರಂದರ ಭಟ್ ಸ್ವಾಗತಿಸಿದರು. ಡಾ. ಶ್ರೀಧರ ಎಚ್. ಜಿ. ಕಾರ್ಯಕ್ರಮ ನಿರ್ವಹಿಸಿದರು.

    0 Responses to “ತಿಂಗಳ ತರಂಗ - ೦೩”

    Subscribe