Tuesday, January 12, 2010
ತಿಂಗಳ ತರಂಗ ೪. - ಚರಿತ್ರೆ ಕಟ್ಟುವ ಬಗೆ
ಇಂದು ಚರಿತ್ರೆಯನ್ನು ಹೊಸ ದ್ಟೃಂದ ನೋಡುವ ಅಗತ್ಯವಿದೆ. ಹಾಗೆಯೇ ಚರಿತ್ರೆ ಕಟ್ಟುವ ವಿಧಾನವನ್ನು ಮರುಚಿಂತನೆಗೆ ಗುರಿಪಡಿಸುವ ಅಗತ್ಯವಿದೆ. ಇಂದಿನ ವಿದ್ಯಾರ್ಥಿಗಳಿಗೆ ಭಾರತೀಯ ನೆಲೆಂದ ರಚನೆಗೊಂಡ ಚರಿತ್ರೆಯನ್ನು ತಲುಪಿಸುವ ಅಗತ್ಯವಿದೆ ಎಂದು ದ್ರಾವಿಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಎನ್. ವೆಂಕಟೇಶ್ ಹೇಳಿದರು.
ಅವರು ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ತಿಂಗಳ ತರಂಗ ಕಾರ್ಯಕ್ರಮದಲ್ಲಿ ಯಾವುದು ಚರಿತ್ರೆ ? ಚರಿತ್ರೆ ಕಟ್ಟುವ ಬಗೆ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು.
ಇಂದು ನಾವು ಓದುತ್ತಿರುವ ಚರಿತ್ರೆಯನ್ನು ನಿರ್ಲಿಪ್ತವಾಗಿ ಕಟ್ಟಲಾಗಿದೆಯೇ ? ನಿಜ ಅರ್ಥದಲ್ಲಿ ಪ್ರಸಕ್ತ ಭಾರತದ ಚರಿತ್ರೆಯನ್ನು ಕಟ್ಟಲು ಸಮರ್ಥವಾಗಿದೆಯೇ? ಹೊರಗಿನಿಂದ ಬಂದವರ ದ್ಟೃಂದ ನಿರ್ಮಾಣಗೊಂಡ ಚರಿತ್ರೆಯನ್ನು ಓದುತ್ತಾ ಬಂದಿದ್ದೇವೆ. ಈ ಪ್ರವೃತ್ತಿ ಬದಲಾಗಬೇಕು. ಚರಿತ್ರೆಯ ಪುಟಗಳಲ್ಲಿ ಜನಸಾಮಾನ್ಯರ ಕಲರವ ಕೇಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಚಾರಿತ್ರಿಕ ಮಾಹಿತಿಗಳನ್ನು ಸರಿಯಾಗಿ ಸಂಗ್ರಹಿಸಿ ವಿಶ್ಲೇಷಿಸಿ ಇತಿಹಾಸವನ್ನು ಕಟ್ಟಬೇಕು. ವ್ಯಕ್ತಿಯ ವೈಯಕ್ತಿಕ ದೃಷ್ಟಿಕೋನ ಚರಿತ್ರೆಯ ವಿನ್ಯಾಸವನ್ನು ಬದಲಿಸುತ್ತದೆ ಎಂದು ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ತಮ್ಮ ಅಧ್ಯಕ್ಷ ಭಾಷಣದಲ್ಲಿ ಹೇಳಿದರು.
ಕರ್ನಾಟಕ ಸಂಘದ ಅಧ್ಯಕ್ಷ ಬಿ. ಬಿ ಪುರಂದರ ಭಟ್ ಸ್ವಗತಿಸಿದರು. ಡಾ. ಶ್ರೀಧರ ಎಚ್. ಜಿ. ವಂದಿಸಿದರು. ರೋಹಿಣಾಕ್ಷ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿವೇಕಾನಂದ ಕಾಲೇಜಿನ ಕನ್ನಡ ಸಂಘ ಮತ್ತು ಡಾ. ದುರ್ಗಾಪ್ರವೀಣ ಇವರ ಸಹಯೋಗದಲ್ಲಿ ದಿನಾಂಕ ೧೦.೦೧.೨೦೧೦ರಂದು ಈ ಕಾರ್ಯಕ್ರಮ ನಡೆಯಿತು.
1 Responses to “ತಿಂಗಳ ತರಂಗ ೪. - ಚರಿತ್ರೆ ಕಟ್ಟುವ ಬಗೆ”
January 22, 2010 at 10:59 PM
Sir,
Good initiative... but as a student of VC and I know about ur knowledge... feels that it would be better if u write some thing interesting too..
Regards,
Keshava Prasad M
http://sihimaatu.wordpress.com
Post a Comment