Sunday, January 2, 2011

0

ತಿಂಗಳ ತರಂಗ - ಜನವರಿ ೨೦೧೧

  • Sunday, January 2, 2011
  • ಡಾ.ಶ್ರೀಧರ ಎಚ್.ಜಿ.
  • Share
  • ೧೪ನೆಯ ಶತಮಾನದಿಂದಲೇ ತುಳು ಭಾಷೆಯಲ್ಲಿ ಸಾಹಿತ್ಯ ರಚನೆಯಾಗಿದೆ. ಆದರೆ ರಾಜಕೀಯಬಲ ಇಲ್ಲದಿರುವುದರಿಂದ ತುಳು ಲಿಪಿಗೊಂದು ಅಸ್ತಿತ್ವ ಸಿಗಲಿಲ್ಲ. ಅರುಣಾಬ್ಜನ ತುಳು ಭಾರತ ತುಳು ಮತ್ತು ಕನ್ನಡ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಮಹತ್ವದ ಕೃತಿ. ತುಳು ಭಾರತದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮರಳಿ ಕಟ್ಟಲು ಬೇಕಾದ ಅಂಶಗಳಿವೆ ಎಂದು ಉಪನ್ಯಾಸಕ ಡಾ. ಧನಂಜಯ ಕುಂಬ್ಳೆ ಹೇಳಿದರು.

    ಅವರು ಪುತ್ತೂರು ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ತಿಂಗಳ ತರಂಗ ಕಾರ್ಯಕ್ರಮದಲ್ಲಿ ಅರುಣಾಬ್ಜನ ತುಳು ಭಾರತೋ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು.

    ತುಳು ಭಾರತವು ಕುಮಾರ ವ್ಯಾಸ ಭಾರತದ ನೆರಳಲ್ಲ. ಅನುಸಂಧಾನದ ಪ್ರಕ್ರಿಯೆ ಇಲ್ಲಿದೆ. ಅರುಣಾಬ್ಜನ ವಿಶಿಷ್ಟ ಕಥನ ಶೈಲಿ, ಛಂದೋ ವೈವಿಧ್ಯ, ಕೃತಿಯೊಳಗೆ ಸಿಗುವ ಕರಾವಳಿಯ ಪ್ರಾದೇಶಿಕ ವಿವರಗಳು, ದೈವಾರಾಧನೆಯ ಚಿತ್ರಗಳು, ಇಲ್ಲಿನ ಸಸ್ಯ ಸಂಪತ್ತು, ಜನಪದೀಯವಾದ ಅಂಶಗಳು ಈ ಕೃತಿಯ ಸ್ವೋಪಜ್ಞತೆಗೆ ಕಾರಣವಾಗಿದೆ. ತುಳು ಭಾರತ ತುಳುನಾಡಿನ ಸಾಂಸ್ಕೃತಿಕ ಕಣಜ ಎಂದು ಡಾ. ಧನಂಜಯ ಹೇಳಿದರು.

    ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಸ್ವಾಗತಿಸಿದರು. ಐ.ಕೆ. ಬೊಳುವಾರು ಕಾರ್ಯಕ್ರಮ ನಿರ್ವಹಿಸಿದರು. ಡಾ. ಶ್ರೀಧರ ಎಚ್. ಜಿ. ವಂದಿಸಿದರು. ದಿನಾಂಕ ೦೨.೦೧.೨೦೧೧ ರಂದು ಅನುರಾಗ ವಠಾರದಲ್ಲಿ ಈ ಕಾರ್ಯಕ್ರಮವು ನಡೆಯಿತು.

    0 Responses to “ತಿಂಗಳ ತರಂಗ - ಜನವರಿ ೨೦೧೧”

    Subscribe