Monday, September 6, 2010
3
ಮನೆಗೆ ಬರುವ ಸಂಭ್ರಮ
ಜೂನ್ ಒಂದರಂದು ಸಂಜೆ ನನ್ನ ವಿದ್ಯಾರ್ಥಿ (ಹಿಂದಿನ)ಮನೋಜ್ ಮಹಾವೀರದಲ್ಲಿ ಓಡಾಡುತ್ತಿರುವುದು ಸವಿತಳ ಕಣ್ಣಿಗೆ ಬಿತ್ತು. ಏನೆಂದು ವಿಚಾರಿಸಿದಳು. ದೊಡ್ಡಪ್ಪನಿಗೆ ಅನಾರೋಗ್ಯವಾಗಿ ಬಂದಿರುವುದಾಗಿ ತಿಳಿಸಿದ. ಆಗಲೇ ನಾನಲ್ಲಿರುವುದು ಗೊತ್ತಾಗಿ ನನ್ನ ಕೊಠಡಿಗೆ ಬಂದ. ಹೋಗುವಾಗ ನನ್ನ ಮೇಲಿನ ಪ್ರೀತಿಂದ ' ಸರ್, ನಿಮಗೆ ಓಡಾಡಲು ಭುಜಕ್ಕೆ ಆನಿಸಿಕೊಂಡು ಹೋಗುವ ಸ್ಟಿಕ್ ನನ್ನಲ್ಲಿದೆ. ಬೇಕಿದ್ದರೆ ಹೇಳಿ. ತಂದು ಕೊಡುತ್ತೇನೆ' ಎಂದ. ಮರುದಿನ ಅದನ್ನು ನನ್ನ ಮನೆಗೇ ತಂದು ಕೊಟ್ಟ.!
ಆಸ್ಪತ್ರೆಯಲ್ಲಿ ಮೊದಲ ಮೂರು ದಿನ ನನ್ನ ಭಾವ ನನ್ನೊಂದಿಗೆ ರಾತ್ರಿ ಆಸ್ಪತ್ರೆಯಲ್ಲಿದ್ದರು. ಹಗಲು ನನ್ನ ಮನೆಯಾಕೆ ಇರುತ್ತಿದ್ದಳು. ಮೂರನೆಯ ದಿನ ನಾನೇ ಭಾವನನ್ನು ಊರಿಗೆ ಕಳಿಸಿದೆ. ಆತನೂ ಮನೆಯಲ್ಲಿ ಒಬ್ಬನೇ ಇರುವುದು. ಹೊಲ ಮನೆ ಎಂದು ಸಾಕಷ್ಟು ಕೆಲಸವಿರುತ್ತದೆಯಲ್ಲಾ ! ನನ್ನ ಒತ್ತಾಯಕ್ಕೆ ಅವರು ಸಾಗರಕ್ಕೆ ಮರಳಿ ಹೋದರು.
ಅಂದು ಮೇ ೩೧. ಸಂಜೆಯಾಗುತ್ತಿದ್ದಂತೆ ರಾತ್ರಿ ನನ್ನೊಂದಿಗೆ ಇರುವುದು ಯಾರು ಎಂಬ ಸಮಸ್ಯೆ ನಿಧಾನವಾಗಿ ಆಕಾರ ಪಡೆಯತೊಡಗಿತು. ಆ ದಿನ ಸಂಜೆಯಿಂದ ಹೊರಗೆ ಕಾಲಿಡಲಾಗದಷ್ಟು ವಿಪರೀತ ಮಳೆ. ಸಂಜೆ ಹೊಡೆದ ಸಿಡಿಲಿಗೆ ಮೊಬೈಲ್ ಟವರ್ಗಳು ಮಲಗಿದ್ದವು. ಹೊರಜಗತ್ತನ್ನು ಸಂಪರ್ಕಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ನನ್ನಲ್ಲಿದ್ದ ಮೊಬೈಲು ಮೌನವಾಗಿತ್ತು. ಕಷ್ಟದಿಂದ ವಿನಯ ಭಟ್ಟರನ್ನು ಸಂಪರ್ಕಿಸಿದೆ. ಬಿರುಸಿನಿಂದ ಸುರಿಯುತ್ತಿದ್ದ ಮಳೆಯಲ್ಲಿಯೇ ವಿನಯ ಭಟ್ಟರು ಆಸ್ಪತ್ರೆಗೆ ಬಂದರು. ಅಂದು ರಾತ್ರಿಡೀ ಮಳೆ ಸುರಿಯುತ್ತಲೇ ಇತ್ತು.
ಜೂನ್ ೧ ರಂದು ರಾತ್ರಿಯ ಪಾಳಿಗೆ ನಮ್ಮ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ಆಡುವ ಪ್ರಕಾಶ್ ಕುಮಾರ್ ಬಂದರು. ಜೂನ್ ೨ ರಂದು ರಾತ್ರಿಗೆ ಮತ್ತೊಮ್ಮೆ ಅರುಣ ಪ್ರಕಾಶ್ ನೆರವಿಗೆ ಬಂದರು.
ಜೂನ್ ೨ ರಂದು ನನಗೆ ಆಸ್ಪತ್ರೆಂದ ಬಿಡುಗಡೆಯಾಗುವ ಸಂಭ್ರಮ. ಅಂದಿನ ಸೂರ್ಯೋದಯ ನನ್ನಲ್ಲಿ ಹೆಚ್ಚು ಉಲ್ಲಾಸವನ್ನು ಮೂಡಿಸಿತ್ತು. ಸುರಿಯುವ ಮಳೆ ವಿಶೇಷ ಕಳೆಯನ್ನು ತಂದಿತ್ತು. ನಾನು ಸುಮಾರು ೧೧ ಗಂಟೆಗೆಲ್ಲ ಮನೆಗೆ ಹೋಗಬಹುದು ಎಂಬ ಉತ್ಸಾಹದಲ್ಲಿದ್ದೆ. ಆದರೆ 'ಬಿಲ್ಲಹಬ್ಬ' ತುಂಬಾ ತಡವಾತು. ಎಲ್ಲವನ್ನೂ ಮುಗಿಸಿ ಹೊರಟಾಗ ೨ ಗಂಟೆ ಕಳೆದಿತ್ತು. ಆಸ್ಪತ್ರೆಂದ ಹೊರಗೆ ಕಾಲಿಟ್ಟಾಗ ಮನಸ್ಸಿಗೆ ಏನೋ ಒಂದು ನಿರಾಳ ಭಾವ. ಏನೆಲ್ಲ ಸೌಕರ್ಯವಿದ್ದರೂ ಅಸ್ಪತ್ರೆ ಆಸ್ಪತ್ರೆಯೇ !
ಗೆಳೆಯ ಡಾ. ಶ್ರೀಧರ ನಾಯಕ್ ತಮ್ಮ ವಾಹನವನ್ನು ತಂದಿದ್ದರಿಂದ ಮನೆಗೆ ಬರಲು ಅನುಕೂಲವಾತು. ಪುತ್ತೂರಿನಲ್ಲಿದ್ದೂ ನಾನು ಒಂದು ವಾರಕಾಲ ಯಾವಾಗಲೂ ಈ ರೀತಿ ಮನೆಂದ ಹೊರಗಿರಲಿಲ್ಲ. ಹೀಗಾಗಿ ನನ್ನ ಮಟ್ಟಿಗೆ ಇದೊಂದು ದಾಖಲೆ.
ಇಲ್ಲಿಂದ ಮುಂದೆ ನನ್ನ ನಿಜವಾದ ಅಜ್ಞಾತ ವಾಸದ ಆರಂಭ. ಮುಂದಿನ ಒಂದೂವರೆ ತಿಂಗಳು ಮನೆಂದ ಹೊರಗೆ ಬರದ ಸ್ಥಿತಿ. ಕಾಲನ್ನು ನೆಲಕ್ಕೆ ಊರುವಂತಿಲ್ಲ; ಬಗ್ಗಿಸುವಂತಿಲ್ಲ. ಸರಿಯಾಗಿ ಮಲಗಲೂ ಆಗುತ್ತಿರಲಿಲ್ಲ. ಮೊದಲಿನ ಒಂದು ವಾರ ಒಂದಷ್ಟು ನೋವು, ಕಿರಿಕಿರಿ. ನಿಧಾನವಾಗಿ ಇದು ಕಡಿಮೆಯಾಗುವಾಗ ನಾನು ಬರವಣಿಗೆ ಮತ್ತು ಓದಿನ ಕಡೆ ಮನಸ್ಸನ್ನು ತಿರುಗಿದೆ. ಭಾರತೀಸುತರ ಬಗೆಗೆ ಕಳೆದ ವರ್ಷ ಒಂದು ಸೆಮಿನಾರ್ ಮಡಿಕೇರಿಯಲ್ಲಿ ಆಗಿತ್ತು. ಅದನ್ನು ಸಾಹಿತ್ಯ ಅಕಾಡೆಮಿಗೆ ಪುಸ್ತಕ ರೂಪದಲ್ಲಿ ಮಾಡಿಕೊಡಬೇಕಿತ್ತು. ಇದನ್ನು ಸಂಪೂರ್ಣ ಮಾಡಿದೆ. ಹಾಗೆಯೇ ಒಂದಷ್ಟು ಕಾದಂಬರಿಗಳು ಓದಲು ಬಾಕಿಯಾಗಿತ್ತು. ಇದರಲ್ಲಿ ನಾ. ಮೊಗಸಾಲೆಯವರ ಉಲ್ಲಂಘನೆಯೂ ಒಂದು. ಇದೇ ಹೊತ್ತಿಗೆ ಬೈರಪ್ಪನವರ ಕವಲು ಮಾರುಕಟ್ಟೆಗೆ ಬಂತು. ಹೀಗೆ ಓದಿನ ಭರದಲ್ಲಿ ದಿನಗಳು ಹೇಗೆ ಉರುಳಿದವು ಎಂಬುದು ಗೊತ್ತೇ ಆಗಲಿಲ್ಲ.
ಈ ನಡುವೆ ಒಂದೆರಡು ಸಲ ವೈದ್ಯರ ಭೇಟಿಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೇ ಹೊರಜಗತ್ತಿನೊಂದಿಗಿನ ನನ್ನ ಸಂಪರ್ಕ ಎನ್ನಬೇಕು. ಈ ಅವಧಿಯಲ್ಲಿ ಪತ್ರಿಕೆ, ಪುಸ್ತಕ ಮತ್ತು ಟಿ.ವಿ. ನನ್ನ ಸಂಗಾತಿಗಳು. ನಾನಿರುವಲ್ಲಿಗೇ ನನ್ನ ಮನೆಯಾಕೆ ಅತ್ಯಂತ ಶ್ರದ್ಧೆಯಿಂದ ಊಟ, ಉಪಹಾರವನ್ನು ಸರಬರಾಜು ಮಾಡುತ್ತಿದ್ದರಿಂದ ನಾನು ಮನೆಯಲ್ಲಿಯೂ ಸೀಮಿತ ವಲಯದಲ್ಲಿ ಚಲಿಸುತ್ತಿದ್ದೆ. ಈ ದಿನಗಳಲ್ಲಿ ಕೆಲವು ಮಂದಿ ನನ್ನ ಅಭಿಮಾನಿ ವಿದ್ಯಾರ್ಥಿಗಳು ಮನೆಗೂ ಬಂದು ಮಾತನಾಡಿಸಿ, ಒಂದಷ್ಟು ಹರಟೆ ಹೊಡೆದು ನನ್ನ ಬೇಸರವನ್ನು ಹೋಗಲಾಡಿಸಿದ್ದಿದೆ.
ಜುಲೈ ೭ರಂದು ಎಕ್ಸ್ರೇ ತೆಗೆದು ಪರಿಶೀಲನೆ ನಡೆಸಿದ ಡಾ. ಪ್ರದೀಪರು ಶೇಕಡಾ ೫೦ರಷ್ಟು ಭಾರವನ್ನು ಕಾಲಿನ ಮೇಲೆ ಹಾಕಿ ನಡೆಯಲು ಸೂಚಿಸಿದ್ದು ನನ್ನಲ್ಲಿ ಒಂದಷ್ಟು ಆತ್ಮವಿಶ್ವಾಸವನ್ನು ಮೂಡಿಸಿತು. ಇದಾಗಿ ಒಂದು ವಾರದ ನಂತರ ೭೫ ಕಾಲು ೨೫ ಕೋಲು ಎಂಬ ಅನುಪಾತದಲ್ಲಿ ನಡೆಯಲು ಸೂಚಿಸಿದರು. ಜುಲೈ ೨೦ರ ಹೊತ್ತಿಗೆ ಎಲ್ಲವೂ ಸರಿಯಾಗುತ್ತದೆ ಎಂಬ ಅವರ ಮಾತು ನನಗೆ ಅಮೃತ ಸಮಾನವಾಗಿತ್ತು.
ಈ ನಡುವೆ ಜುಲೈ ೧೪ರಿಂದ ನಾನು ಕಾಲೇಜಿಗೆ ಪಾಠ ಮಾಡಲು ಹೋಗುವುದೆಂದು ಸಂಕಲ್ಪ ಮಾಡಿದ್ದೆ. ಹಾಗೆ ಹೋಗುವುದಕ್ಕೆ ನನಗೊಂದು ವಾಕಿಂಗ್ ಸ್ಟಿಕ್ ಬೇಕಿತ್ತು. ಆಗ ಪಕ್ಕನೆ ನೆನಪಾದವರೇ ಕೆ. ಎನ್. ಶರ್ಮರು. ನನ್ನ ಪತ್ನಿಯ ತಂಗಿ ಶರ್ಮರ ಸೊಸೆ. ಹೀಗಾಗಿ ಬಾಂಧವ್ಯದ ಎಳೆಯೊಂದು ನಮ್ಮ ನಡುವಿದೆ.
ಮೂಲತ: ಪುತ್ತೂರಿನವರಾಗಿದ್ದು ಈಗ ಸಾಗರದಲ್ಲಿರುವ ಕೆ.ಎನ್. ಶರ್ಮರು ಕೌಟುಂಬಿಕ ಕಾರ್ಯಕ್ರಮದ ನಿಮಿತ್ತ ಪುತ್ತೂರಿಗೆ ಬರುವವರಿದ್ದರು. ಅವರು ಇತ್ತೀಚೆಗೆ ಅಮೆರಿಕದಿಂದ ಬರುವಾಗ ನಾಲ್ಕಾರು ವಾಕಿಂಗ್ ಸ್ಟಿಕ್ ತಂದಿರುವುದಾಗಿ ನನ್ನಲ್ಲಿ ಹೇಳಿದ್ದರು. ಅವರಲ್ಲಿದ್ದ ಹೆಚ್ಚುವರಿ ಸ್ಟಿಕ್ನ ಮೇಲೆ ನನ್ನ ಕಣ್ಣು ಬಿತ್ತು. ಅವರು ಅತ್ಯಂತ ಪ್ರೀತಿಂದ ಅದನ್ನು ಮನೆಗೆ ತಂದು ಕೊಟ್ಟರು. ಇದರಿಂದ ಕಾಲೇಜಿಗೆ ಹೋಗಿ ಬರಲು ಅನುಕೂಲವಾಯಿತು.
ಆಸ್ಪತ್ರೆಗೆ ಗೋಪಾಲಕೃಷ್ಣ ಕುಂಟಿನಿಯವರೊಂದಿಗೆ ಬಂದಿದ್ದ ಬಿ.ಟಿ.ರಂಜನ್, ಮತ್ತೊಮ್ಮೆ ಸಂಜೆಯ ಹೊತ್ತು ದೂರವಾಣಿಯಲ್ಲಿ ಒಂದಷ್ಟು ಹರಟಿ, ಜೋಕ್ಸ್ ಹೇಳಿ ನಗಿಸಿದ್ದರು. ಜುಲೈ ೧೨ ರಂದು ಮನೆಗೂ ಬಂದರು. ಈ ಬಗೆಯ ಭೇಟಿಗಳು ನಮ್ಮ ನಡುವಣ ಮಾನವ ಸಂಬಂಧಗಳನ್ನು ಬೆಸೆಯುತ್ತದೆ. ನನಗೀಗ ಅನಿಸುತ್ತಿದೆ ; ಅಪಘಾತ ನನ್ನ ಋಣಭಾರವನ್ನು ಹೆಚ್ಚಿಸಿದೆ.
ಆಸ್ಪತ್ರೆಯಲ್ಲಿ ಮೊದಲ ಮೂರು ದಿನ ನನ್ನ ಭಾವ ನನ್ನೊಂದಿಗೆ ರಾತ್ರಿ ಆಸ್ಪತ್ರೆಯಲ್ಲಿದ್ದರು. ಹಗಲು ನನ್ನ ಮನೆಯಾಕೆ ಇರುತ್ತಿದ್ದಳು. ಮೂರನೆಯ ದಿನ ನಾನೇ ಭಾವನನ್ನು ಊರಿಗೆ ಕಳಿಸಿದೆ. ಆತನೂ ಮನೆಯಲ್ಲಿ ಒಬ್ಬನೇ ಇರುವುದು. ಹೊಲ ಮನೆ ಎಂದು ಸಾಕಷ್ಟು ಕೆಲಸವಿರುತ್ತದೆಯಲ್ಲಾ ! ನನ್ನ ಒತ್ತಾಯಕ್ಕೆ ಅವರು ಸಾಗರಕ್ಕೆ ಮರಳಿ ಹೋದರು.
ಅಂದು ಮೇ ೩೧. ಸಂಜೆಯಾಗುತ್ತಿದ್ದಂತೆ ರಾತ್ರಿ ನನ್ನೊಂದಿಗೆ ಇರುವುದು ಯಾರು ಎಂಬ ಸಮಸ್ಯೆ ನಿಧಾನವಾಗಿ ಆಕಾರ ಪಡೆಯತೊಡಗಿತು. ಆ ದಿನ ಸಂಜೆಯಿಂದ ಹೊರಗೆ ಕಾಲಿಡಲಾಗದಷ್ಟು ವಿಪರೀತ ಮಳೆ. ಸಂಜೆ ಹೊಡೆದ ಸಿಡಿಲಿಗೆ ಮೊಬೈಲ್ ಟವರ್ಗಳು ಮಲಗಿದ್ದವು. ಹೊರಜಗತ್ತನ್ನು ಸಂಪರ್ಕಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ನನ್ನಲ್ಲಿದ್ದ ಮೊಬೈಲು ಮೌನವಾಗಿತ್ತು. ಕಷ್ಟದಿಂದ ವಿನಯ ಭಟ್ಟರನ್ನು ಸಂಪರ್ಕಿಸಿದೆ. ಬಿರುಸಿನಿಂದ ಸುರಿಯುತ್ತಿದ್ದ ಮಳೆಯಲ್ಲಿಯೇ ವಿನಯ ಭಟ್ಟರು ಆಸ್ಪತ್ರೆಗೆ ಬಂದರು. ಅಂದು ರಾತ್ರಿಡೀ ಮಳೆ ಸುರಿಯುತ್ತಲೇ ಇತ್ತು.
ಜೂನ್ ೧ ರಂದು ರಾತ್ರಿಯ ಪಾಳಿಗೆ ನಮ್ಮ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ಆಡುವ ಪ್ರಕಾಶ್ ಕುಮಾರ್ ಬಂದರು. ಜೂನ್ ೨ ರಂದು ರಾತ್ರಿಗೆ ಮತ್ತೊಮ್ಮೆ ಅರುಣ ಪ್ರಕಾಶ್ ನೆರವಿಗೆ ಬಂದರು.
ಜೂನ್ ೨ ರಂದು ನನಗೆ ಆಸ್ಪತ್ರೆಂದ ಬಿಡುಗಡೆಯಾಗುವ ಸಂಭ್ರಮ. ಅಂದಿನ ಸೂರ್ಯೋದಯ ನನ್ನಲ್ಲಿ ಹೆಚ್ಚು ಉಲ್ಲಾಸವನ್ನು ಮೂಡಿಸಿತ್ತು. ಸುರಿಯುವ ಮಳೆ ವಿಶೇಷ ಕಳೆಯನ್ನು ತಂದಿತ್ತು. ನಾನು ಸುಮಾರು ೧೧ ಗಂಟೆಗೆಲ್ಲ ಮನೆಗೆ ಹೋಗಬಹುದು ಎಂಬ ಉತ್ಸಾಹದಲ್ಲಿದ್ದೆ. ಆದರೆ 'ಬಿಲ್ಲಹಬ್ಬ' ತುಂಬಾ ತಡವಾತು. ಎಲ್ಲವನ್ನೂ ಮುಗಿಸಿ ಹೊರಟಾಗ ೨ ಗಂಟೆ ಕಳೆದಿತ್ತು. ಆಸ್ಪತ್ರೆಂದ ಹೊರಗೆ ಕಾಲಿಟ್ಟಾಗ ಮನಸ್ಸಿಗೆ ಏನೋ ಒಂದು ನಿರಾಳ ಭಾವ. ಏನೆಲ್ಲ ಸೌಕರ್ಯವಿದ್ದರೂ ಅಸ್ಪತ್ರೆ ಆಸ್ಪತ್ರೆಯೇ !
ಗೆಳೆಯ ಡಾ. ಶ್ರೀಧರ ನಾಯಕ್ ತಮ್ಮ ವಾಹನವನ್ನು ತಂದಿದ್ದರಿಂದ ಮನೆಗೆ ಬರಲು ಅನುಕೂಲವಾತು. ಪುತ್ತೂರಿನಲ್ಲಿದ್ದೂ ನಾನು ಒಂದು ವಾರಕಾಲ ಯಾವಾಗಲೂ ಈ ರೀತಿ ಮನೆಂದ ಹೊರಗಿರಲಿಲ್ಲ. ಹೀಗಾಗಿ ನನ್ನ ಮಟ್ಟಿಗೆ ಇದೊಂದು ದಾಖಲೆ.
ಇಲ್ಲಿಂದ ಮುಂದೆ ನನ್ನ ನಿಜವಾದ ಅಜ್ಞಾತ ವಾಸದ ಆರಂಭ. ಮುಂದಿನ ಒಂದೂವರೆ ತಿಂಗಳು ಮನೆಂದ ಹೊರಗೆ ಬರದ ಸ್ಥಿತಿ. ಕಾಲನ್ನು ನೆಲಕ್ಕೆ ಊರುವಂತಿಲ್ಲ; ಬಗ್ಗಿಸುವಂತಿಲ್ಲ. ಸರಿಯಾಗಿ ಮಲಗಲೂ ಆಗುತ್ತಿರಲಿಲ್ಲ. ಮೊದಲಿನ ಒಂದು ವಾರ ಒಂದಷ್ಟು ನೋವು, ಕಿರಿಕಿರಿ. ನಿಧಾನವಾಗಿ ಇದು ಕಡಿಮೆಯಾಗುವಾಗ ನಾನು ಬರವಣಿಗೆ ಮತ್ತು ಓದಿನ ಕಡೆ ಮನಸ್ಸನ್ನು ತಿರುಗಿದೆ. ಭಾರತೀಸುತರ ಬಗೆಗೆ ಕಳೆದ ವರ್ಷ ಒಂದು ಸೆಮಿನಾರ್ ಮಡಿಕೇರಿಯಲ್ಲಿ ಆಗಿತ್ತು. ಅದನ್ನು ಸಾಹಿತ್ಯ ಅಕಾಡೆಮಿಗೆ ಪುಸ್ತಕ ರೂಪದಲ್ಲಿ ಮಾಡಿಕೊಡಬೇಕಿತ್ತು. ಇದನ್ನು ಸಂಪೂರ್ಣ ಮಾಡಿದೆ. ಹಾಗೆಯೇ ಒಂದಷ್ಟು ಕಾದಂಬರಿಗಳು ಓದಲು ಬಾಕಿಯಾಗಿತ್ತು. ಇದರಲ್ಲಿ ನಾ. ಮೊಗಸಾಲೆಯವರ ಉಲ್ಲಂಘನೆಯೂ ಒಂದು. ಇದೇ ಹೊತ್ತಿಗೆ ಬೈರಪ್ಪನವರ ಕವಲು ಮಾರುಕಟ್ಟೆಗೆ ಬಂತು. ಹೀಗೆ ಓದಿನ ಭರದಲ್ಲಿ ದಿನಗಳು ಹೇಗೆ ಉರುಳಿದವು ಎಂಬುದು ಗೊತ್ತೇ ಆಗಲಿಲ್ಲ.
ಈ ನಡುವೆ ಒಂದೆರಡು ಸಲ ವೈದ್ಯರ ಭೇಟಿಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೇ ಹೊರಜಗತ್ತಿನೊಂದಿಗಿನ ನನ್ನ ಸಂಪರ್ಕ ಎನ್ನಬೇಕು. ಈ ಅವಧಿಯಲ್ಲಿ ಪತ್ರಿಕೆ, ಪುಸ್ತಕ ಮತ್ತು ಟಿ.ವಿ. ನನ್ನ ಸಂಗಾತಿಗಳು. ನಾನಿರುವಲ್ಲಿಗೇ ನನ್ನ ಮನೆಯಾಕೆ ಅತ್ಯಂತ ಶ್ರದ್ಧೆಯಿಂದ ಊಟ, ಉಪಹಾರವನ್ನು ಸರಬರಾಜು ಮಾಡುತ್ತಿದ್ದರಿಂದ ನಾನು ಮನೆಯಲ್ಲಿಯೂ ಸೀಮಿತ ವಲಯದಲ್ಲಿ ಚಲಿಸುತ್ತಿದ್ದೆ. ಈ ದಿನಗಳಲ್ಲಿ ಕೆಲವು ಮಂದಿ ನನ್ನ ಅಭಿಮಾನಿ ವಿದ್ಯಾರ್ಥಿಗಳು ಮನೆಗೂ ಬಂದು ಮಾತನಾಡಿಸಿ, ಒಂದಷ್ಟು ಹರಟೆ ಹೊಡೆದು ನನ್ನ ಬೇಸರವನ್ನು ಹೋಗಲಾಡಿಸಿದ್ದಿದೆ.
ಜುಲೈ ೭ರಂದು ಎಕ್ಸ್ರೇ ತೆಗೆದು ಪರಿಶೀಲನೆ ನಡೆಸಿದ ಡಾ. ಪ್ರದೀಪರು ಶೇಕಡಾ ೫೦ರಷ್ಟು ಭಾರವನ್ನು ಕಾಲಿನ ಮೇಲೆ ಹಾಕಿ ನಡೆಯಲು ಸೂಚಿಸಿದ್ದು ನನ್ನಲ್ಲಿ ಒಂದಷ್ಟು ಆತ್ಮವಿಶ್ವಾಸವನ್ನು ಮೂಡಿಸಿತು. ಇದಾಗಿ ಒಂದು ವಾರದ ನಂತರ ೭೫ ಕಾಲು ೨೫ ಕೋಲು ಎಂಬ ಅನುಪಾತದಲ್ಲಿ ನಡೆಯಲು ಸೂಚಿಸಿದರು. ಜುಲೈ ೨೦ರ ಹೊತ್ತಿಗೆ ಎಲ್ಲವೂ ಸರಿಯಾಗುತ್ತದೆ ಎಂಬ ಅವರ ಮಾತು ನನಗೆ ಅಮೃತ ಸಮಾನವಾಗಿತ್ತು.
ಈ ನಡುವೆ ಜುಲೈ ೧೪ರಿಂದ ನಾನು ಕಾಲೇಜಿಗೆ ಪಾಠ ಮಾಡಲು ಹೋಗುವುದೆಂದು ಸಂಕಲ್ಪ ಮಾಡಿದ್ದೆ. ಹಾಗೆ ಹೋಗುವುದಕ್ಕೆ ನನಗೊಂದು ವಾಕಿಂಗ್ ಸ್ಟಿಕ್ ಬೇಕಿತ್ತು. ಆಗ ಪಕ್ಕನೆ ನೆನಪಾದವರೇ ಕೆ. ಎನ್. ಶರ್ಮರು. ನನ್ನ ಪತ್ನಿಯ ತಂಗಿ ಶರ್ಮರ ಸೊಸೆ. ಹೀಗಾಗಿ ಬಾಂಧವ್ಯದ ಎಳೆಯೊಂದು ನಮ್ಮ ನಡುವಿದೆ.
ಮೂಲತ: ಪುತ್ತೂರಿನವರಾಗಿದ್ದು ಈಗ ಸಾಗರದಲ್ಲಿರುವ ಕೆ.ಎನ್. ಶರ್ಮರು ಕೌಟುಂಬಿಕ ಕಾರ್ಯಕ್ರಮದ ನಿಮಿತ್ತ ಪುತ್ತೂರಿಗೆ ಬರುವವರಿದ್ದರು. ಅವರು ಇತ್ತೀಚೆಗೆ ಅಮೆರಿಕದಿಂದ ಬರುವಾಗ ನಾಲ್ಕಾರು ವಾಕಿಂಗ್ ಸ್ಟಿಕ್ ತಂದಿರುವುದಾಗಿ ನನ್ನಲ್ಲಿ ಹೇಳಿದ್ದರು. ಅವರಲ್ಲಿದ್ದ ಹೆಚ್ಚುವರಿ ಸ್ಟಿಕ್ನ ಮೇಲೆ ನನ್ನ ಕಣ್ಣು ಬಿತ್ತು. ಅವರು ಅತ್ಯಂತ ಪ್ರೀತಿಂದ ಅದನ್ನು ಮನೆಗೆ ತಂದು ಕೊಟ್ಟರು. ಇದರಿಂದ ಕಾಲೇಜಿಗೆ ಹೋಗಿ ಬರಲು ಅನುಕೂಲವಾಯಿತು.
ಆಸ್ಪತ್ರೆಗೆ ಗೋಪಾಲಕೃಷ್ಣ ಕುಂಟಿನಿಯವರೊಂದಿಗೆ ಬಂದಿದ್ದ ಬಿ.ಟಿ.ರಂಜನ್, ಮತ್ತೊಮ್ಮೆ ಸಂಜೆಯ ಹೊತ್ತು ದೂರವಾಣಿಯಲ್ಲಿ ಒಂದಷ್ಟು ಹರಟಿ, ಜೋಕ್ಸ್ ಹೇಳಿ ನಗಿಸಿದ್ದರು. ಜುಲೈ ೧೨ ರಂದು ಮನೆಗೂ ಬಂದರು. ಈ ಬಗೆಯ ಭೇಟಿಗಳು ನಮ್ಮ ನಡುವಣ ಮಾನವ ಸಂಬಂಧಗಳನ್ನು ಬೆಸೆಯುತ್ತದೆ. ನನಗೀಗ ಅನಿಸುತ್ತಿದೆ ; ಅಪಘಾತ ನನ್ನ ಋಣಭಾರವನ್ನು ಹೆಚ್ಚಿಸಿದೆ.
Subscribe to:
Post Comments (Atom)
3 Responses to “ಮನೆಗೆ ಬರುವ ಸಂಭ್ರಮ”
September 7, 2010 at 9:17 PM
Dear Sir Parikshith here..I read your narration,Its really AMAZING!!
September 9, 2010 at 12:03 PM
ಸರ್ ಪ್ರತಿವಾರವೂ ಓದಲು ಕುತೂಹಲದಿಂದ ಕಾಯುತ್ತಿದ್ದೆ.
ಮನಸ್ಸಿಗೆ ತಟ್ಟುವಂತಿತ್ತು ಹಾಗೂ ಕಣ್ಣಿಗೆ ಕಾಣುವಂತಿತ್ತು
September 16, 2010 at 8:48 PM
sir ....its been pleasure that u are recovered!!! and u r on back of ur green scooter again...happy for you ..sir ....and always this blog has been my favourite pass time ....i fell like i am going through kannada dictionary ,......
Post a Comment