Saturday, February 27, 2010

0

ಕನ್ನಡಕ್ಕೆ ತಂತ್ರಜ್ಞಾನ ವಿರೋಧವೂ ಅಲ್ಲ; ಮಾರಕವೂ ಅಲ್ಲ - ಡಾ. ಪಿ.ವಿ. ನಾರಾಯಣ

  • Saturday, February 27, 2010
  • ಡಾ.ಶ್ರೀಧರ ಎಚ್.ಜಿ.
  • Share
  • ಫೆಬ್ರವರಿ ೨೭ : ಪ್ರಾಚೀನ ಕಾಲದಿಂದಲೂ ಅನ್ಯಭಾಷೆಯ ಆಕ್ರಮಣ, ದೌರ್ಜನ್ಯಗಳನ್ನು ಮೀರಿ ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳೆದುಬಂದಿದೆ. ಜನಸಾಮಾನ್ಯರ ಸಂವಹನ ಮಾಧ್ಯಮವಾಗಿ ಉಳಿದು ಬಂದಿದೆ. ಸಿದ್ದಮಾದರಿಗಳನ್ನು ಒಡೆದು, ಪರಂಪರೆಯ ಸತ್ವವನ್ನು ಹೀರಿ ಕನ್ನಡತನ ಶತಮಾನಗಳಿಂದ ಉಳಿದು ಬಂದಿದೆ. ಹೀಗಾಗಿ ಕನ್ನಡಕ್ಕೆ ತಂತ್ರಜ್ಞಾನ ವಿರೋಧವೂ ಅಲ್ಲ; ಮಾರಕವೂ ಅಲ್ಲ. ತಂತ್ರಜ್ಞಾನವನ್ನು ಪಳಗಿಸುವ ಮೂಲಕ ಕನ್ನಡ ಬೆಳೆಯಬೇಕು. ಹೀಗಾಗಿ ಐ.ಟಿ. ಯುಗದಲ್ಲಿಯೂ ಕನ್ನಡಕ್ಕೆ ಯಾವುದೇ ತೊಂದರೆಯಾಗದು. ಹಳೆಯದನ್ನು ಉಳಿಸಿಕೊಂಡು ಹೊಸದನ್ನು ಕಟ್ಟುವ ಸವಾಲು ನಮ್ಮ ಮುಂದಿದೆ ಎಂದು ಡಾ. ಕೆ.ವಿ. ನಾರಾಯಣ ಹೇಳಿದರು.
    ಅವರು ಕರ್ನಾಟಕ ಸಂಘ ಪುತ್ತೂರು ಇದರ ನೇತೃತ್ವದಲ್ಲಿ ನಡೆಯುತ್ತಿರುವ ಒಂಬತ್ತು ದಿನಗಳ ಸಾಹಿತ್ಯ ಕಲಾಕುಶಲೋಪರಿ ಸಂಸ್ಕೃತಿ ಸಲ್ಲಾಪ ೨೦೧೦ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
    ಕಲಿಕೆಗೆ ಇಂದಿನ ಶೈಕ್ಷಣಿಕ ವ್ಯವಸ್ಥೆ ಕಡಿವಾಣ ಹಾಕುತ್ತಿದೆ. ಅಭಿವೃದ್ಧಿ ಎಂಬುದು ಭಾಷೆ ಮತ್ತು ಸಂಸ್ಕೃತಿಯಿಂದ ಹೊರತಾಗಿಲ್ಲ. ಭಾಷೆಯ ವಿಶಯದಲ್ಲಿ ಮಿಶ್ರಸಂಸ್ಕೃತಿಯುಳ್ಳ ತುಳುನಾಡಿನಲ್ಲಿ ಕನ್ನಡದ ಕೆಲಸ ಸಾಕಷ್ಟು ಆಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಸುರೇಂದ್ರರಾವ್ ಹೇಳಿದರು.
    ವಿವೇಕಾನಂದ ಕಾಲೇಜಿನ ಪ್ರಿನ್ಸಿಪಾಲರಾದ ಪ್ರೊ. ಆರ್. ವೇದವ್ಯಾಸ ಶುಭಾಶಯದ ಮಾತುಗಳನ್ನು ಹೇಳೆದರು.
    ಕಾರ್ಯಕ್ರಮದ ಆರಂಭದಲ್ಲಿ ಪಾವನಗಂಗಾ ಪ್ರಾರ್ಥಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ವಂದಿಸಿದರು. ಡಾ. ಶ್ರೀಧರ ಎಚ್. ಜಿ. ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

    0 Responses to “ಕನ್ನಡಕ್ಕೆ ತಂತ್ರಜ್ಞಾನ ವಿರೋಧವೂ ಅಲ್ಲ; ಮಾರಕವೂ ಅಲ್ಲ - ಡಾ. ಪಿ.ವಿ. ನಾರಾಯಣ”

    Subscribe