Tuesday, January 12, 2010

0

ಮಂಕುತಿಮ್ಮನ ಕಗ್ಗದ ಬಗೆಗೆ ಉಪನ್ಯಾಸ ಮಾಲಿಕೆ ಆರಂಭ :

  • Tuesday, January 12, 2010
  • ಡಾ.ಶ್ರೀಧರ ಎಚ್.ಜಿ.
  • Share
  • ಪುತ್ತೂರಿನ ಲಕ್ಷ್ಮೀಶ ತೋಳ್ಪಾಡಿಯವರದು ಅತ್ಯುತ್ತಮ ಚಿಂತಕರಲ್ಲಿ ಒಬ್ಬರು. ಭಗವದ್ಗೀತೆ, ಮಹಾಭಾರತ, ರಾಮಾಯಣ, ಭಾಗವತ, ವೇದ, ಉಪನಿಷತ್ತು, ಸೌಂದರ್ಯಲಹರಿ, ಯೋಗವಾಸಿಷ್ಠ - ಹೀಗೆ ಹಲವು ವಿಷಯದ ಮೇಲೆ ನಿರಂತರವಾಗಿ ಉಪನ್ಯಾಸಗಳನ್ನು ನೀಡುತ್ತಾ ಬಂದ ಹಿರಿಮೆ ಇವರದು. ಇದಕ್ಕೆಲ್ಲ ವೇದಿಕೆಯನ್ನು ಕಲ್ಪಿಸಿದ್ದು ಪುತ್ತೂರಿನ ಪುರಂದರಭಟ್ಟರ ಅನುರಾಗ. ಇದೀಗ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಬಗೆಗೆ ಉಪನ್ಯಾಸ ಮಾಲಿಕೆ ದಿನಾಂಕ ೦೯.೦೧.೨೦೧೦ರಿಂದ ಆರಂಭವಾಗಿದೆ.
    ಮಂಕುತಿಮ್ಮನ ಕಗ್ಗ ಕನ್ನಡ ಸಂಸ್ಕೃತಿಯ ಒಂದು ಅಶ್ವತ್ಥವೃಕ್ಷ. ಡಿ.ವಿ.ಜಿ.ಯವರ ಕೃತಿಯಲ್ಲಿ ಕಲಿತದ್ದರ ಚೆಲುವಿದೆ. ಹಾಗೆಯೇ ಕಲಿತದ್ದನ್ನು ಮೀರುವ ತುಡಿತವಿದೆ. ವ್ಯಕ್ತಿ ತನ್ನ ಮಹತ್ವವನ್ನು ಕಳೆದುಕೊಂಡಾಗ ತಾನು ಕಂಡ ಸತ್ಯವನ್ನು ಹಂಚುವ ಹಂಬಲವಿದೆ. ಬದುಕಿನ ಬಗೆಗೆನ ವ್ಯಾಮೋಹವನ್ನು ಕಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮನಸ್ಸು ಮಾತನಾಡಿದ ಸ್ಥಿತಿ ಇಲ್ಲಿದೆ ಎಂಬ ಅವರ ಆರಂಭದ ಮಾತುಗಳು ಕಗ್ಗಕ್ಕೊಂದು ಚೌಕಟ್ಟನ್ನು ಕಲ್ಪಿಸಿತು.
    ಕರ್ನಾಟಕ ಸಂಘದ ಅಧ್ಯಕ್ಷರಾದ ಬಿ ಪುರಂದರಭಟ್ಟರು ಆರಂಭದಲ್ಲಿ ಸಂಪ್ರದಾಯದಂತೆ ಫಲವಸ್ತುಗಳನ್ನು ನೀಡಿ ಉಪನ್ಯಾಸ ನೀಡುವಂತೆ ಲಕ್ಷ್ಮೀಶ ತೋಳ್ಪಾಡಿಯವರನ್ನು ವಿನಂತಿ ಮಾಡಿದರು. ಈ ಉಪನ್ಯಾಸ ಮಾಲಿಕೆ ಪ್ರತಿ ಶುಕ್ರವಾರ ಸಂಜೆ ೫.೩೦ ರಿಂದ ೭ ಗಂಟೆಯವರೆಗೆ ನಡೆಯುತ್ತದೆ.

    0 Responses to “ಮಂಕುತಿಮ್ಮನ ಕಗ್ಗದ ಬಗೆಗೆ ಉಪನ್ಯಾಸ ಮಾಲಿಕೆ ಆರಂಭ :”

    Subscribe