Sunday, February 2, 2014
0
ದಿನಾಂಕ 1.2.2014ರಂದು ಕನ್ನಡ ಸಂಘದ ಆಶ್ರಯದಲ್ಲಿ ಕೀರ್ತಿನಾಥ ಕುರ್ತಕೋಟಿಯವರ ಬಗೆಗೆ ಡಾ. ಜಿ.ಬಿ. ಹರೀಶ್ ಉಪನ್ಯಾಸ ನೀಡಿದರು. ಕುರ್ತಕೋಟಿಯವರ ವಿಮರ್ಶೆಯ ಒಳನೋಟಗಳನ್ನು ತಮ್ಮ ಮಾತುಗಳಲ್ಲಿ ಗುರುತಿಸಿದರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಡಾ. ವರದರಾಜ ಚಂದ್ರಗಿರಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀಧರ ಎಚ್. ಜಿ. ವಂದಿಸಿದರು. ಗೀತಾಕುಮಾರಿ ಮತ್ತು ರತ್ನಾವತಿ ಕಾರ್ಯಕ್ರಮ ನಿರೂಪಿಸಿದರು. ಮೇಘ ಕುಕ್ಕುಜೆ ಪ್ರಾರ್ಥನೆ ಮಾಡಿದರು.
Subscribe to:
Post Comments (Atom)
0 Responses to “ ”
Post a Comment